ಸಹಜ ಯೋಗ ಧ್ಯಾನ ಆಧ್ಯಾತ್ಮಿಕ ಇತಿಹಾಸದಲ್ಲಿ ಅನನ್ಯ ಆವಿಷ್ಕಾರವಾಗಿದೆ. ನಮ್ಮಲಿ ಸಂಗ್ರಹಿಸಿರುವ ಆಂತರಿಕ ಶಕ್ತಿಯ ಜಾಗೃತಿಯಿಂದ ಸಹಜವಾಗಿ ಪರಿವರ್ತನೆಯನ್ನು ಮಾನವರಲ್ಲಿ ಕಾಣಬಹುದು.ಶ್ರೀ ಮಾತಾಜಿ ನಿರ್ಮಲಾ ದೇವಿಯವರು ಈ ಅತ್ಯದ್ಭುತ ಧ್ಯಾನ ಪ್ರಕ್ರಿಯೆಯನ್ನು ಕಂಡುಹಿಡಿದರು, ಸುಮಾರು 120 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಇಂದು ಸಹಜ ಯೋಗ ಧ್ಯಾನವನ್ನು ಅಭ್ಯಾಸ ಮಾಡಲಾಗುತ್ತಿದೆ .ಏಲ್ಲಾ ವರ್ಗದ ಮನುಷ್ಯರಲ್ಲಿ ಹಿತವಾದ ಬೆಳವಣಿಗೆ ಕಂಡು ಬರುತ್ತಿದೆ.ಬನ್ನಿ ನಮ್ಮ ಉಚಿತ ಆನ್ಲೈನ್ ಅವಧಿಗಳ ಮುಖಾಂತರ ಜಾಗೃತಿಯ ಪ್ರಯಾಣದಲ್ಲಿ ಭಾಗಿಯಾಗಿ.
ಧ್ಯಾನದಿಂದ ಆನಂದ ಸ್ಥಿತಿಯನ್ನು ಕಾಣಲು ಎದುರು ನೋಡುತ್ತಿರುವ ಎಲ್ಲಾ ವರ್ಗದ ಜನರಿಗೆ ನಾವು ಉಚಿತ ಆನ್ಲೈನ್ ಧ್ಯಾನ ತರಗತಿಗಳನ್ನು ನಡೆಸುತ್ತೇವೆ. ಶೈಕ್ಷಣಿಕ ಸಂಸ್ಥೆ ಹಾಗು ಕಾರ್ಪೊರೇಟ್ ಗಳಿಗೆ ಉಚಿತ ಧ್ಯಾನ ಕಾರ್ಯಾಗಾರಗಳನ್ನು (ವರ್ಕ್ ಶಾಪ್) ನಡೆಸುತ್ತೇವೆ.ನೀವು ಧ್ಯಾನದಿಂದ ಒತ್ತಡ,ಆತಂಕದಿಂದ ಹೊರಬಂದು ಸಮತೋಲನ ಜೀವನವನ್ನು ನಡೆಸಲು ಎದುರು ನೋಡುತ್ತಿದ್ದರೆ ಅಥವ ನಿಮ್ಮ ಸಂಸ್ಥೆಯಲ್ಲಿ ನಿಮ್ಮ ತಂಡದವರಿಗೆ ಧ್ಯಾನದ ಅವಧಿಯನ್ನು ಆಯೋಜಿಸಲು ಎದುರು ನೋಡುತ್ತಿದ್ದರೆ ದಯವಿಟ್ಟು ಸಂಕೋಚವಿಲ್ಲದೆ ನಮ್ಮ ಕೆಳಕಂಡ ಸಂಯೋಜಕರಿಗೆ ತಲುಪಿ. ನೀವು ನೊಂದಣಿ(ರಿಜಿಸ್ಟರ್) ಆಗುವ ಮುಖಾಂತರ ನಮ್ಮ ಮುಂದಿನ ನವೀಕರಣಗಳು ಹಾಗು ಕಾರ್ಯಕ್ರಮಗಳ ಬಗ್ಗೆ ತಿಳಿಯಬಹುದು.
ನಮ್ಮ ಸ್ಟಾಲ್ಗೆ (c 46) ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ. ಆತ್ಮಸಾಕ್ಷಾತ್ಕಾರವನ್ನು ಅನುಭವಿಸಿ. ಇದನ್ನು ಪರಿಶೀಲಿಸಬಹುದು, ಇದಕ್ಕೆ ಯಾವುದೇ ಹಣ ಖರ್ಚಾಗುವುದಿಲ್ಲ. ನಿಮ್ಮ ಜೀವನದ ವಿಭಿನ್ನ ಅರ್ಥವನ್ನು ಸ್ವಾಗತಿಸಿ. ಇದು ನಿಮ್ಮ ಜೀವನದ ಅತ್ಯಂತ ಗಮನಾರ್ಹ ದಿನವಾಗಲಿದೆ!
ಒತ್ತಡ ಹಾಗು ಆತಂಕದಿಂದ ನಿವಾರಣೆ
ಆನಂದ ಹಾಗು ಸ್ವಯಂ ಪ್ರೇರಿತ ವ್ಯಕ್ತಿತ್ವದ ರಚನೆ
ರೋಗ ನಿರೋಧಕ ಶಕ್ತಿಯಲ್ಲಿ ಸುಧಾರಿಸುವಿಕೆ
ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಸಮತೋಲನ ಸ್ಥಿತಿಯನ್ನು ತಲುಪಲು ಸಾಧ್ಯ
ನಿಮ್ಮನ್ನು ಸೃಷ್ಟಿಸಿರುವ ಶಕ್ತಿಯೊಂದಿಗೆ ಒಂದಾಗುವಿರಿ ಹಾಗು ಉನ್ನತ ಆಂತರಿಕ ಶಕ್ತಿಯ ಜಾಗೃತಿಯ ಅನುಭವ
ಉತ್ತಮ ಮಾನವನಾಗಿ ಪರಿವರ್ತನೆ
100 ಕ್ಕೂ ಹೆಚ್ಚು ಅನ್ವೇಷಕರು ಭಾಗವಹಿಸಿದ ಅತ್ಯಂತ ವಿಶಿಷ್ಟವಾದ ಸಾರ್ವಜನಿಕ ಕಾರ್ಯಕ್ರಮವನ್ನು ನಾವು ಹೊಂದಿದ್ದೆವು. ಇದು ಸಂಗೀತ ಸಂಜೆಯ ಮೂಲಕ ಆತ್ಮಸಾಕ್ಷಾತ್ಕಾರ ಕಾರ್ಯಕ್ರಮವಾಗಿತ್ತು ಮತ್ತು ಆದ್ದರಿಂದ ಇದಕ್ಕೆ "ಅಮೃತಾನುಭವ" ಎಂದು ಹೆಸರು ಬಂದಿತು.
ಈ ಕಾರ್ಯಕ್ರಮವು ಮಾನವ ಜೀವನ, ಅದರ ಶಾಶ್ವತ ಬಯಕೆ, ಕ್ರಿಯೆಗಳು, ಪುರಾಣ ಮತ್ತು ನಿಜವಾದ ಜೀವನದ ಸುಂದರ ನಿರೂಪಣೆಯೊಂದಿಗೆ ವಿಷಯಾಧಾರಿತವಾಗಿತ್ತು. ಕನ್ನಡ ಮತ್ತು ಸಂಸ್ಕೃತ ಎರಡರಲ್ಲೂ ಭಜನೆಗಳ ಸುಂದರ ಪ್ರಸ್ತುತಿ ಕಾರ್ಯಕ್ರಮದ ಪ್ರಭಾವಲಯವನ್ನು ಹೆಚ್ಚಿಸಿತು.
ಅಂತಿಮವಾಗಿ, ಪರಮಪೂಜ್ಯ ಶ್ರೀ ಮಾತಾಜಿ ನಿರ್ಮಲಾ ದೇವಿಯವರ ವೀಡಿಯೊದಿಂದ ಆತ್ಮಸಾಕ್ಷಾತ್ಕಾರ.
ಜುಲೈ 11 ರಂದು ನಡೆದ BSides ನ ವಾರ್ಷಿಕ ಸೈಬರ್ ಸೆಕ್ಯುರಿಟಿ ಸಮ್ಮೇಳನ 2025 ರ ಕ್ಷೇಮ ಪಾಲುದಾರರಾಗಿ ಸಹಜ ಯೋಗ ಕರ್ನಾಟಕವನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಅನ್ವೇಷಕರು ನಮ್ಮ ಸ್ಟಾಲ್ಗೆ ಭೇಟಿ ನೀಡಿದರು ಮತ್ತು ಎಲ್ಲರೂ ಆಂತರಿಕ ಶಕ್ತಿ - ಕುಂಡಲಿನಿಯ ಸ್ವಯಂಪ್ರೇರಿತ ಜಾಗೃತಿಯನ್ನು ಅನುಭವಿಸಿದರು ಮತ್ತು ಶ್ರಮರಹಿತ ಧ್ಯಾನವನ್ನು ಆನಂದಿಸಿದರು.
ಸಹಜ ಯೋಗ ಕರ್ನಾಟಕವು ಜೂನ್ 25 ರಿಂದ 29 ರವರೆಗೆ ಉಡುಪಿ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಆತ್ಮಸಾಕ್ಷಾತ್ಕಾರ ಮತ್ತು ಧ್ಯಾನ ಕಾರ್ಯಕ್ರಮಗಳನ್ನು ನಡೆಸಿತು.
200 ಕ್ಕೂ ಹೆಚ್ಚು ಶಾಲೆಗಳು, ಕಾಲೇಜುಗಳು ಮತ್ತು ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
17,000 ಹೊಸ ಅನ್ವೇಷಕರು ಆತ್ಮಸಾಕ್ಷಾತ್ಕಾರವನ್ನು ಪಡೆದರು.
ಸಹಜ ಯೋಗ ಕರ್ನಾಟಕವು ಕರ್ನಾಟಕದಾದ್ಯಂತ 60 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜೂನ್ 21, 2025 ರಂದು 20,000 ಕ್ಕೂ ಹೆಚ್ಚು ಹೊಸ ಅನ್ವೇಷಕರು ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಪಡೆದರು.
ಇದು ಸಹಜ ಯೋಗ ಧ್ಯಾನದ ಪರಿಚಯದ ಅಧಿವೇಶನವಾಗಿದೆ, ಇದನ್ನು ಸರಳ ಮತ್ತು ಆಳವಾಗಿ ಪರಿವರ್ತಿಸುವ ಧ್ಯಾನ ತಂತ್ರವಾಗಿದೆ, ಇದನ್ನು 120 ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳು ಮತ್ತು ವಯಸ್ಕರು ಅಭ್ಯಾಸ ಮಾಡುತ್ತಿದ್ದಾರೆ
ಗ್ಲೋಬಲ್ ರೆಕಾರ್ಡ್ಸ್ ಅಂಡ್ ರಿಸರ್ಚ್ ಫೌಂಡೇಷನ್ ದಾಖಲಾತಿ ಪ್ರಮಾಣಪತ್ರದಂತೆ ಸುಮಾರು 1.2 ದಶಲಕ್ಷ ಸಹಜ ಯೋಗ ಧ್ಯಾನ ಅಭ್ಯಸಿಸುತ್ತಿರುವವರು ಆನ್ಲೈನ್ ಧ್ಯಾನ ಕಾರ್ಯಕ್ರಮದಲ್ಲಿ ಲಾಕ್ಡೌನ್ ಸಮಯದಲ್ಲಿ ಮೇ ತಿಂಗಳಿನಲ್ಲಿ ಭಾಗಿಯಾಗಿದ್ದರು
ಇದು ಸಹಜ ಯೋಗ ಧ್ಯಾನದ ಪರಿಚಯದ ಅಧಿವೇಶನವಾಗಿದೆ.
ಇದು ಸಹಜ ಯೋಗ ಧ್ಯಾನದ ಪರಿಚಯದ ಅಧಿವೇಶನವಾಗಿದೆ.
ಧ್ಯಾನದಲ್ಲಿ ಆಸಕ್ತಿವುಳ್ಳವರಿಗೆ ಹಾಗು ಆಧ್ಯಾತ್ಮಿಕ ಬೆಳವಣಿಗೆಗಾಗಿ ಎದುರು ನೋಡುತ್ತಿರುವ ಸಾಧಕರಿಗಾಗಿ ನಾವು ನಮ್ಮ ವೆಬ್ ಸೈಟ್ ರಚನೆ ಮಾಡಿದ್ದೇವೆ. ಸಹಜ ಯೋಗ ಧ್ಯಾನದ ಬಗ್ಗೆ ಹೆಚ್ಚು ತಿಳಿಯಲು ನಮ್ಮ ಮುಖ್ಯ ವೆಬ್ ಸೈಟ್ ಗೆ ಭೇಟಿ ನೀಡಿ. ಸಹಜ ಯೋಗ ಧ್ಯಾನವನ್ನು ಅಭ್ಯಾಸ ಮಾಡುತ್ತಿರುವವರಿಂದ ತಮ್ಮ ಜೀವನದಲ್ಲಿ ನಡೆದಿರುವ ಬದಲಾವಣೆಯ ಅನುಭವದ ಮಾತುಗಳನ್ನು ತಿಳಿಯಿರಿ. ನಮ್ಮ ಬ್ಲಾಗ್ ಮುಖಾಂತರ ಇನ್ನಷ್ಟು ಮಾಹಿತಿಯನ್ನು ತಿಳಿಯಲು ತಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಸರಳವಾದ 10 ನಿಮಿಷಗಳ ಧ್ಯಾನವು ಮಕ್ಕಳಿಗೆ ಬುದ್ಧಿವಂತಿಕೆ, ಆತ್ಮವಿಶ್ವಾಸ, ಸೃಜನಶೀಲ, ಕ್ರಿಯಾತ್ಮಕವಾಗಲು ಮತ್ತು ಜೀವನದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಇನ್ನೂ ಅನೇಕ ಸಕಾರಾತ್ಮಕ ಗುಣಗಳನ್ನು ಬೆಳೆಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ!
ಅಂತಿಮವಾಗಿ ಹಾಗು ಬಹುಮುಖ್ಯವಾಗಿ ಸಹಜ ಯೋಗ ಧ್ಯಾನದಿಂದ ಆತ್ಮಸಾಕ್ಷಾತ್ಕಾರವನ್ನು ಪ.ಪೂ. ಶ್ರೀ ಮಾತಜಿ ನಿರ್ಮಲಾ ದೇವಿ ಯವರ ಅಮೃತ ವಾಣಿಯಿಂದ ವೀಡಿಯೊ ಮುಖಾಂತರ ಅನುಭವವನ್ನು ಪಡೆಯಿರಿ.